ಕೌಶಲ ತರಬೇತಿ ಕಾರ್ಯಾಗಾರ

ಬರವಣಿಗೆ ಕಲೆಯನ್ನು ಬೆಳೆಸಿಕೊಳ್ಳುವುದು  ಮತ್ತು ಅದರಲ್ಲಿ ಶುದ್ಧತೆಯನ್ನು ತರುವ   ನಿಟ್ಟಿನಲ್ಲಿ ಪತ್ರ ಲೇಖನ ಕಲೆಗಾರಿಕೆ ವಿಷಯದ ಬಗ್ಗೆ  ನೆಹರು ಮೆಮೋರಿಯಲ್ ಪಿ. ಯು ಕಾಲೇಜು, ಸುಳ್ಯ ಇಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿ  ಕಾರ್ಯಾಗಾರವನ್ನು ಆಂಗ್ಲ ಭಾಷಾ ವಿಭಾಗದಿಂದ ಆಯೋಜಿಸಲಾಗಿತ್ತು. ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ಭವ್ಯ ಸಂಪನ್ಮೂಲ ವ್ಯಕಿಗಳಾಗಿ ಆಗಮಿಸಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.   ಕಾರ್ಯಾಗಾರದ ಉದ್ಘಾಟನೆಯಲ್ಲಿ ಕಾಲೇಜಿನ ಪ್ರಾಂಶುಪಾಲರು  ಶ್ರೀಮತಿ ಹರಿಣಿ ಪುತ್ತೂರಾಯ ಮತ್ತು ಸಂಯೋಜಕರಾದ ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀ ಲಕ್ಷ್ಮಣ್ ಏನೆಕಲ್   ಉಪಸ್ಥಿತರಿದ್ದರು.  ವಿದ್ಯಾರ್ಥಿಗಳಾದ ಅನಘ ಪ್ರಾರ್ಥಿಸಿ, ಆತ್ಮೀಯ      ಸ್ವಾಗತಿಸಿ, ವಿಸ್ಮಿತ   ವಂದಿಸಿದರು..   ವಿದ್ಯಾರ್ಥಿ ನಾಯಕ ರಜತ್ ಕುಮಾರ್ ನಿರ್ವಹಿಸಿದರು.