November 2019

ವಾರ್ಷಿಕ ಕ್ರೀಡಾಕೂಟ – 2019

“ಕಠಿಣ ಪರಿಶ್ರಮ ಯಶಸ್ಸನ್ನು ತಂದುಕೊಡುತ್ತದೆ” – ಶ್ರೀಮತಿ ಶೋಭಾ ಚಿದಾನಂದ “ ಕ್ರೀಡೆಯು ಪ್ರತಿಯೊಬ್ಬನಿಗೆ ಪ್ರಾಮುಖ್ಯವಾದುದು. ಅದು ಆತ್ಮವಿಶ್ವಾಸ, ಮಾನಸಿಕ ಸ್ಥೈರ್ಯ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕರಿಸುವುದು”   ಎಂದು ನೆಹರು ಮೆಮೋರಿಯಲ್   ಕಾಲೇಜು, ಸುಳ್ಯ  ಇಲ್ಲಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಂ ಬಾಲಚಂದ್ರ ಗೌಡ ಅವರು ಹೇಳಿದರು. ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ  ಇಲ್ಲಿ   ವಾರ್ಷಿಕ ಕ್ರೀಡಾಕೂಟವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು.  ದ್ವಜಾರೋಹಣವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ , ಕೋಚ್

ವಾರ್ಷಿಕ ಕ್ರೀಡಾಕೂಟ – 2019 Read More »

ಅಣಕು ಮತದಾನ ಕಾರ್ಯಕ್ರಮ

 ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ  ಇಲ್ಲಿ ಅಣಕು ಮತದಾನ ಕಾರ್ಯಕ್ರಮ ನಡೆಸಲಾಯಿತು. ಮತಗಟ್ಟೆ, ಮತಗಟ್ಟೆ ಅಧಿಕಾರಿಗಳು, ಚುನಾವಣಾ ಅಭ್ಯರ್ಥಿಗಳು ಹಾಗು  EVM  ಮತಯಂತ್ರ ಮತದಾನಕ್ಕೆ ಅಳವಡಿಸಲಾಗಿತ್ತು. ಮೂರು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಇದ್ದರು.   ಕಾಲೇಜಿನ ಪ್ರಾಂಶುಪಾಲರು , ಉಪನ್ಯಾಸಕರು, ಎಲ್ಲಾ  ವಿದ್ಯಾರ್ಥಿಗಳು  ಮತ್ತು ಸಿಬ್ಬಂದಿ ವರ್ಗದವರು ಮತದಾನದಲ್ಲಿ  ಪಾಲ್ಗೊಂಡು ಮತ ಚಲಾಯಿಸಿದರು.  ಈ ಕಾರ್ಯಕ್ರಮವನ್ನು ಕಲಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕಿ ಶ್ರೀಮತಿ ರೇಷ್ಮಾ ಅವರು ಸಂಯೋಜಿಸಿ , ಉಪನ್ಯಾಸಕಿ ಶ್ರೀಮತಿ ಜಾನಕೀ  ಸಹಕರಿಸಿದ್ದರು.

ಅಣಕು ಮತದಾನ ಕಾರ್ಯಕ್ರಮ Read More »

ಉತ್ಕರ್ಷ – 2019

“ಶಿಕ್ಷಣ ಎಂಬುದು ಅದ್ಭುತ ಶಕ್ತಿ , ವಿದ್ಯಾರ್ಥಿಗಳ ಪ್ರತಿಭೆ ತೋರ್ಪಡಿಸುವಲ್ಲಿ ಶಿಕ್ಷಣ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾಭ್ಯಾಸದ ಅವಧಿಯಲ್ಲಿ ದುಸ್ಸಾಹಸಕ್ಕೆ ಕೈ ಹಾಕದೆ ಏಕಾಗ್ರತೆ ಸಾಧಿಸುವುದು ಬಹಳ ಮುಖ್ಯ” ಎಂದು   ನೆಹರು ಮೆಮೋರಿಯಲ್ ಪದವಿ   ಕಾಲೇಜಿನ ಪ್ರಾಂಶುಪಾಲರಾದ  ಡಾ. ಗಿರಿಧರ  ಗೌಡ  ಅವರು  ಹೇಳಿದರು.  ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿ  ಹೈಸ್ಕೂಲ್ ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕಾಗಿ ಆಯೋಜಿಸಲಾದ   “ಉತ್ಕರ್ಷ – 2019”   ರ ಉಧ್ಘಾಟನಾ  ಕಾರ್ಯಕ್ರಮದಲ್ಲಿ  ಮಾತನಾಡುತ್ತಿದ್ದರು. ಸ್ಪರ್ಧೆಗಳಲ್ಲಿ ಸೋಲು ಗೆಲುವು

ಉತ್ಕರ್ಷ – 2019 Read More »

ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ಪೃಥ್ವಿಶ್ರೀ ಗೆ ಬಹುಮಾನ

ಪ  .ಪೂ ಶಿಕ್ಷಣ ಇಲಾಖೆ ಮತ್ತು ಎಸ್ .ಡಿ .ಎಂ  ಕಾಲೇಜು ಉಜಿರೆ ಇದರ ಆಶ್ರಯದಲ್ಲಿ ನಡೆದ ಪಿಯು ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ   ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ  ಪೃಥ್ವಿಶ್ರೀ ಕೆ  ತೃತೀಯ   ಸ್ಥಾನ ಗಳಿಸಿರುತ್ತಾರೆ .                            

ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ಪೃಥ್ವಿಶ್ರೀ ಗೆ ಬಹುಮಾನ Read More »

ಶೈಕ್ಷಣಿಕ ಅಧ್ಯಯನ-ಭೇಟಿ

ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ  ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನದ  ಸಲುವಾಗಿ  ಸುಳ್ಯದ ಅಡ್ಕಾರ್  ಅಲ್ಲಿನ  ಗೇರುಬೀಜ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಶ್ರೀಮತಿ ಸಾವಿತ್ರಿ ಮತ್ತು ಕು. ಹರ್ಷಿತಾ ಅವರು ಭೇಟಿಯನ್ನು ಸಂಯೋಜಿಸಿದ್ದರು.

ಶೈಕ್ಷಣಿಕ ಅಧ್ಯಯನ-ಭೇಟಿ Read More »

ಆಯುರ್ವೇದ ಮತ್ತು ಆಯುರ್ವೇದದಲ್ಲಿ ಶಿಕ್ಷಣಾವಕಾಶಗಳು-ಡಾ. ರೋಹಿಣಿ ಭಾರದ್ವಾಜ್

ಸಾವಿರಾರು ವರುಷಗಳ ಇತಿಹಾಸವಿರುವ ಆಯುರ್ವೇದ ಆಧುನಿಕ ದಿನಗಳಲ್ಲಿ ಅತ್ಯಂತ ಬೇಡಿಕೆಯ ವೈದ್ಯ ವಿಜ್ಞಾನ . ಮನುಷ್ಯನ ಜೀವನ ಕ್ರಮವನ್ನು ಹೇಳುವ ವಿಜ್ಞಾನವೇ ಆಯುರ್ವೇದ ಎಂದು ಕೆವಿಜಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಧ್ಯಾಪಕಿ   ಡಾ. ರೋಹಿಣಿ ಭಾರದ್ವಾಜ್ ಹೇಳಿದರು.  ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ  ಇಲ್ಲಿನ ವಿಜ್ಞಾನ   ವಿಭಾಗದಿಂದ  ಆಯುರ್ವೇದ ಮತ್ತು ಆಯುರ್ವೇದದಲ್ಲಿ ಶಿಕ್ಷಣಾವಕಾಶಗಳು ಎಂಬುದರ ಬಗ್ಗೆ ಆಯೋಜಿಸಲಾದ  ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾಲೇಜಿನ ಪ್ರಾಂಶಪಾಲರು ಶ್ರೀಮತಿ ಹರಿಣಿ ಪುತ್ತೂರಾಯ ಮತ್ತು ಬೌತಶಾಸ್ತ್ರ

ಆಯುರ್ವೇದ ಮತ್ತು ಆಯುರ್ವೇದದಲ್ಲಿ ಶಿಕ್ಷಣಾವಕಾಶಗಳು-ಡಾ. ರೋಹಿಣಿ ಭಾರದ್ವಾಜ್ Read More »