ಸದ್ಭಾವನಾ ದಿನಾಚರಣೆ – August 20, 2019

ಭಾರತದಲ್ಲಿ  ಜನರು ತಮ್ಮ ತಮ್ಮ  ಆಚರಣೆಯಲ್ಲಿ , ಪದ್ಧತಿ ಮತ್ತು ಪರಂಪರೆಯಲ್ಲಿ ಜಾತ್ಯಾತೀತ ಎಂಬ ಅಂಶವನ್ನು ಮೈಗೂಡಿಸಿಕೊಂಡು ಸಹಬಾಳ್ವೆಯಿಂದ ಜೀವಿಸುವ ಮನೋಪ್ರವೃತ್ತಿ ಯನ್ನು ಹೊಂದಿದವರು. ಅದಕ್ಕೆ ಯಾವತ್ತೂ ದಕ್ಕೆ ಬಾರದ ರೀತಿಯಲ್ಲಿ ಮುಂದುವರಿಯುತ್ತಾ ಬಾಳಬೇಕು   ಎಂದು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿನ ಪ್ರಾಂಶುಪಾಲರು ಶ್ರೀಮತಿ ಹರಿಣಿ ಪುತ್ತೂರಾಯ ಅವರು  ನುಡಿದರು. ಅವರು ಕಾಲೇಜಿನಲ್ಲಿ ಆಯೋಜಿಸಲಾದ ಸದ್ಭಾವನಾ ದಿನಾಚರಣೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇವಲ ಕಾಟಾಚಾರಕ್ಕಾಗಿ  ಈ ದಿನಾಚರಣೆಯನ್ನು ಆಚರಿಸದೆ, ನಾವು ಮಾಡುವ  ಪ್ರತಿಯೊಂದು ಕೆಲಸದಲ್ಲಿ ಯಾವುದೇ ಜಾತಿ, ಧರ್ಮ, ಮತ ಎಂಬ ಬೇಧಭಾವ ಇಲ್ಲದೆ  ಒಟ್ಟಾಗಿ ಕೆಲಸ ಮಾಡುವ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ನಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು, ದೇಶದ ಸಂವಿಧಾನ ಮತ್ತು  ಕಾನೂನುಗಳನ್ನು ಗೌರವಿಸುತ್ತಾ , ಸೌಹಾರ್ದತೆಯಿಂದ ಬಾಳಿದಾಗ ಸದೃಢ ಭಾರತ ನಮ್ಮದಾಗುತ್ತದೆ ಎಂದರು. ನಂತರದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಪ್ರಾಂಶುಪಾಲರು ಬೋಧಿಸಿದರು. ಕಾಲೇಜಿನ ಉಪನ್ಯಾಸಕ ವೃಂದವರು ಭಾಗವಹಿಸಿದ್ದರು.