News & Events

Teacher’s day at NMPUC- September 5, 2019

ಗುರುವಿನ ಮಾರ್ಗದರ್ಶನದಿಂದ ಸ್ಪಷ್ಟ ಗುರಿಯನ್ನು ಹೊಂದಿ ವಿದ್ಯಾರ್ಥಿಗಳು ಮುನ್ನಡೆದಾಗ ವಿದ್ಯೆ ಎಂಬ ಸಂಪತ್ತನ್ನು ದಕ್ಕಿಸಿಕೊಳ್ಳಬಹುದು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಬದುಕು ನಮಗೆ ಆದರ್ಶ ಎಂದು  ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಹೇಳಿದರು. ಅವರು ಕಾಲೇಜಿನ ವಿದ್ಯಾರ್ಥಿ ಸಂಘ ಆಯೋಜಿಸಿದ್ದ  ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಉಪನ್ಯಾಸಕರೆಲ್ಲರೂ ಹಾಡು, ನೃತ್ಯವನ್ನು ಸಾದರಪಡಿಸಿದರು.

Teacher’s day at NMPUC- September 5, 2019 Read More »

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಜಿಲ್ಲಾಮಟ್ಟಕ್ಕೆ

ಸರಕಾರಿ ಪ. ಪೂ ಕಾಲೇಜು ಗುತ್ತಿಗಾರು ಇಲ್ಲಿ ಸೆಪ್ಟೆಂಬರ್ 4 ರಂದು  ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಆಯೋಜಿಸಲ್ಪಟ್ಟ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ, ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಹುಡುಗರ ವಾಲಿಬಾಲ್ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತದೆ. ಹರ್ಷಿತಾ ಗೌಡ ಉತ್ತಮ ಹೊಡೆತಗಾರ  ಪ್ರಶಸ್ತಿ ಗಳಿಸಿದ್ದು , ಮೊಹಮ್ಮದ್ ಸುಹೈಬ್ ಪಂದ್ಯಾಟದ ಸರ್ವ ಶ್ರೇಷ್ಠ ಆಟಗಾರ ಎಂದು ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ತಂಡವನ್ನು ಅಭಿನಂದಿಸಿರುತ್ತಾರೆ.

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಜಿಲ್ಲಾಮಟ್ಟಕ್ಕೆ Read More »

ಧ್ಯಾನ ತರಬೇತಿ ಶಿಬಿರ

ಸಮಚಿತ್ತದಿಂದ ಮಾನಸಿಕ ದೃಢತೆಯನ್ನು ಸಾಧಿಸಬೇಕು ಮತ್ತು  ಆ  ಮೂಲಕವಾಗಿ ಏಕಾಗ್ರತೆ, ಸಂಯಮವನ್ನು ಹೊಂದಬೇಕು. ಆ ನಿಟ್ಟಿನಲ್ಲಿ ಧ್ಯಾನ ನಡೆಸುವುದು ಅತ್ಯಂತ ಸೂಕ್ತ  ಎಂದು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಅವರು ಹೇಳಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ  Heartfulness ಸಂಸ್ಥೆಯಿಂದ 3 ದಿನಗಳ ಕಾಲ ಏರ್ಪಡಿಸಲಾದ ಧ್ಯಾನ ತರಬೇತಿ ಶಿಬಿರದ ಉದ್ಘಾಟನೆಯಲ್ಲಿ ಅವರು ನುಡಿದರು. Heartfulness ಸಂಸ್ಥೆಯ ಶ್ರೀಮತಿ ನಳಿನಿ ಅವರು ಧ್ಯಾನದ ಅಗತ್ಯತೆ ಮತ್ತು ಅದನ್ನು ನಡೆಸುವ

ಧ್ಯಾನ ತರಬೇತಿ ಶಿಬಿರ Read More »

ವಾಣಿಜ್ಯ ವಿದ್ಯಾರ್ಥಿಗಳು ಮೈ ಗೂಡಿಸಿಕೊಳ್ಳಬೇಕಾದ ವೃತ್ತಿ ಕೌಶಲ್ಯಗಳು

ಕೆಲವು ಕೌಶಲ್ಯಗಳನ್ನು ಪ್ರಕೃತಿ  ನಮಗೆ ಕಲಿಸುತ್ತದೆ. ಓದುವುದು ಬರೆಯುವುದು ಲೆಕ್ಕಾಚಾರದ ಸಾಮರ್ಥ್ಯಗಳನ್ನು ನಿತ್ಯ ಜೀವನದಲ್ಲಿ ನಾವೇ ಕಲಿತುಕೊಳ್ಳಬೇಕು. ವೃತ್ತಿ ಮಾರ್ಗದರ್ಶನಕ್ಕೆ ಬೇಕಾದ ಆಸಕ್ತಿ , ಆತ್ಮ ವಿಶ್ವಾಸ,ಒಗ್ಗಟ್ಟು  ಇವುಗಳನ್ನು ಮೈಗೂಡಿಸಿಕೊಂಡು ಹೆಜ್ಜೆ ಇಟ್ಟಾಗ ನಮ್ಮ ವೃತ್ತಿ ಫಲಪ್ರದವಾಗುವುದು ಎಂದು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಎಂಬಿ ಎ ವಿಭಾಗ ಮುಖ್ಯಸ್ಥರಾದ ಡಾ. ಸುರೇಖಾ ಪ್ರಭು ಅವರು ಹೇಳಿದರು. ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ವಾಣಿಜ್ಯ ಸಂಘದ ವತಿಯಿಂದ ನಡೆದ ಆಧುನಿಕ ಯುಗದಲ್ಲಿ ವಾಣಿಜ್ಯ ವಿದ್ಯಾರ್ಥಿಗಳು

ವಾಣಿಜ್ಯ ವಿದ್ಯಾರ್ಥಿಗಳು ಮೈ ಗೂಡಿಸಿಕೊಳ್ಳಬೇಕಾದ ವೃತ್ತಿ ಕೌಶಲ್ಯಗಳು Read More »

ಕಬಡ್ಡಿಯಲ್ಲಿ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಕಬಡ್ಡಿಯಲ್ಲಿ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ. ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ  ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ  ಜರುಗಿದ ಸುಳ್ಯ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ, ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ಹುಡುಗರ ಮತ್ತು ಹುಡುಗಿಯರ ವಿಭಾಗದಲ್ಲಿ ಎರಡು ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಎರಡು ತಂಡಗಳು ಆಯ್ಕೆಗೊಂಡಿರುತ್ತವೆ. ಸಂಸ್ಥೆಯ ಆಡಳಿತ ಮಂಡಳಿ ಯವರು ಮತ್ತು ಪ್ರಾಂಶುಪಾಲರು ಎರಡು ತಂಡಗಳ ವಿದ್ಯಾರ್ಥಿಗಳನ್ನು ಮತ್ತು

ಕಬಡ್ಡಿಯಲ್ಲಿ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ. Read More »

ಸದ್ಭಾವನಾ ದಿನಾಚರಣೆ – August 20, 2019

ಭಾರತದಲ್ಲಿ  ಜನರು ತಮ್ಮ ತಮ್ಮ  ಆಚರಣೆಯಲ್ಲಿ , ಪದ್ಧತಿ ಮತ್ತು ಪರಂಪರೆಯಲ್ಲಿ ಜಾತ್ಯಾತೀತ ಎಂಬ ಅಂಶವನ್ನು ಮೈಗೂಡಿಸಿಕೊಂಡು ಸಹಬಾಳ್ವೆಯಿಂದ ಜೀವಿಸುವ ಮನೋಪ್ರವೃತ್ತಿ ಯನ್ನು ಹೊಂದಿದವರು. ಅದಕ್ಕೆ ಯಾವತ್ತೂ ದಕ್ಕೆ ಬಾರದ ರೀತಿಯಲ್ಲಿ ಮುಂದುವರಿಯುತ್ತಾ ಬಾಳಬೇಕು   ಎಂದು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿನ ಪ್ರಾಂಶುಪಾಲರು ಶ್ರೀಮತಿ ಹರಿಣಿ ಪುತ್ತೂರಾಯ ಅವರು  ನುಡಿದರು. ಅವರು ಕಾಲೇಜಿನಲ್ಲಿ ಆಯೋಜಿಸಲಾದ ಸದ್ಭಾವನಾ ದಿನಾಚರಣೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇವಲ ಕಾಟಾಚಾರಕ್ಕಾಗಿ  ಈ ದಿನಾಚರಣೆಯನ್ನು ಆಚರಿಸದೆ, ನಾವು ಮಾಡುವ  ಪ್ರತಿಯೊಂದು ಕೆಲಸದಲ್ಲಿ

ಸದ್ಭಾವನಾ ದಿನಾಚರಣೆ – August 20, 2019 Read More »

ಪುನಶ್ಚೇತನ ಕಾರ್ಯಾಗಾರ

“ಬೋಧನೆ ಮತ್ತು ಕಲಿಕೆ ಜೊತೆ ಜೊತಯಲ್ಲಿ ಸಾಗಬೇಕು. ಬೋಧನಾ ಕೌಶಲವನ್ನು ಮಕ್ಕಳ ಬೌದ್ಧಿಕ ಮಟ್ಟವನ್ನು ಅರಿತು ಬೋಧಿಸುವ ಕಲೆಯನ್ನು ಸಿದ್ಧಿಸಿಕೊಳ್ಳಬೇಕು. ಆಗ ಕಲಿಕಾ ಪ್ರಕ್ರಿಯೆ ಸುಗಮವಾಗಿ ಸಾಗುತ್ತದೆ”ಎಂದು  ವಿವೇಕಾನಂದ ಕಾಲೇಜಿನ  ವಿಶ್ರಾಂತ ಪ್ರಾಂಶುಪಾಲರು   ಡಾ। ಮಾಧವ ಭಟ್ ಅವರು ಹೇಳಿದರು. ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಗಾಗಿ  ಆಯೋಜಿಸಲಾದ ಪುನಶ್ಚೇತನ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಶ್ರೀ   ಜಗದೀಶ್ ಅಡ್ತಲೆ  , ನೆಹರು ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ

ಪುನಶ್ಚೇತನ ಕಾರ್ಯಾಗಾರ Read More »