News & Events

ಬೇಂದ್ರೆಯವರ ಬದುಕು -ಬರಹ ಕಾರ್ಯಕ್ರಮ

ವರಕವಿ ಬೇಂದ್ರೆಯವರು ಉತ್ಕ್ರಷ್ಟ ಕೃತಿ ರಚನೆಯನ್ನು ಮಾಡುವುದರ ಮೂಲಕ ಕನ್ನಡಕ್ಕೆ ಶ್ರೀಮಂತ ಕಾಣಿಕೆಯನ್ನು ನೀಡಿದ್ದಾರೆ ಬೇಂದ್ರೆಯವರ ಕವನಗಳು ,ನಾದ ,ಲಯ ,ಚೈತನ್ಯ  & ವಿಶ್ವ ಪ್ರಜ್ಞೆಯಿಂದ ಕೂಡಿದ್ದು, ಮುಖ್ಯವಾಗಿ ದೇಸಿ ಭಾಷೆಯಲ್ಲಿ ಕೃತಿ ರಚಿಸಿ ಕನ್ನಡಕ್ಕಾಗಿ ತನ್ನನ್ನು ತಾನು ಒಪ್ಪಿಸಿಕೊಂಡವರು ಕವಿ ಬೇಂದ್ರೆಯವರು ಎಂದು ವಾಸವಿ ಸಾಹಿತ್ಯ ಕಲಾ ವೇದಿಕೆ ಅಧ್ಯಕ್ಷೆ ಡಾ.ವೀಣಾ  ಹೇಳಿದರು .ಅವರು ಸುಳ್ಯ ಎನ್ನೆಂಪಿಯುಸಿಯಲ್ಲಿ ಕನ್ನಡ  ವಿಭಾಗದ ವತಿಯಿಂದ ನಡೆದ ಬೇಂದ್ರೆಯವರ ಬದುಕು -ಬರಹ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ ಹರಿಣಿ […]

ಬೇಂದ್ರೆಯವರ ಬದುಕು -ಬರಹ ಕಾರ್ಯಕ್ರಮ Read More »

ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ – ಸಮಾರೋಪ ಸಮಾರಂಭ

ಪದವಿ ಪೂರ್ವ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಮತ್ತು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇದರ ಸಹಯೋಗದಲ್ಲಿ ಸುಳ್ಯ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಕೆವಿಜಿ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ಆಯೋಜನೆಗೊಂಡಿತ್ತು. ಹುಡುಗಿಯರ ವಿಭಾಗದಲ್ಲಿ ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ ಹಾಗು ಹುಡುಗರ ವಿಭಾಗದಲ್ಲಿ ಎನ್ನೆಮ್ ಪಿಯುಸಿ ಅರಂತೋಡು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಆಗಿ ಹುಡುಗಿಯರ ವಿಭಾಗದಲ್ಲಿ ಎನ್ನೆಮ್ ಪಿಯುಸಿ ಅರಂತೋಡು ಇಲ್ಲಿನ ರಚನಾ ಡಿ ಯು

ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ – ಸಮಾರೋಪ ಸಮಾರಂಭ Read More »

ಸುಳ್ಯ ತಾಲೂಕು ಕ್ರೀಡಾಕೂಟ-2019

ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು  ಮತ್ತು ನೆಹರು ಮೆಮೋರಿಯಲ್ ಪ.ಪೂ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ತಾಲೂಕು ಮಟ್ಟದ ಪದವಿಪೂರ್ವ ವಿಭಾಗದ ಕ್ರೀಡಾಕೂಟ ಅಕ್ಟೊಬರ್ 1 ರಂದು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿನ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು. ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಹೊತ್ತು ಕ್ರೀಡಾಂಗಣವನ್ನು ಪ್ರವೇಶಿಸುವುದರೊಂದಿಗೆ ಕ್ರೀಡಾಕೂಟವನ್ನು ಕೆವಿಜಿ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಶ್ರೀಮತಿ ಶೋಭಾ ಚಿದಾನಂದ ರವರು ದ್ವಜಾರೋಹಣಗೈದು, ದೀಪ ಬೆಳಗುವುದರ

ಸುಳ್ಯ ತಾಲೂಕು ಕ್ರೀಡಾಕೂಟ-2019 Read More »

ರಾಜ್ಯ ಮಟ್ಟದ ಕಬಡ್ಡಿ ತಂಡಕ್ಕೆ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಿಂದ ಆಯ್ಕೆ- ಅಭಿನಂದನೆಗಳು

ರಾಜ್ಯ ಮಟ್ಟದ  ಹುಡುಗರ ಕಬಡ್ಡಿ ತಂಡಕ್ಕೆ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ಅಭಿಷೇಕ್ ಮತ್ತು ಹುಡುಗಿಯರ ರಾಜ್ಯ ಕಬಡ್ಡಿ ತಂಡಕ್ಕೆ ದ್ವಿತೀಯ ವಾಣಿಜ್ಯ ವಿಭಾಗದ ವಿಸ್ಮಿತ ಆಯ್ಕೆಗೊಂಡಿರುತ್ತಾರೆ. ಇವರನ್ನು ಕಾಲೇಜಿನ   ಆಡಳಿತ ಮಂಡಳಿಯವರು ಮತ್ತು ಪ್ರಾಂಶುಪಾಲರು ಅಭಿನಂದಿಸಿರುತ್ತಾರೆ.

ರಾಜ್ಯ ಮಟ್ಟದ ಕಬಡ್ಡಿ ತಂಡಕ್ಕೆ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಿಂದ ಆಯ್ಕೆ- ಅಭಿನಂದನೆಗಳು Read More »

ಜಿಲ್ಲಾಮಟ್ಟದ ಪದವಿಪೂರ್ವ ವಿಭಾಗದ ಕಬಡ್ಡಿ ಪಂದ್ಯಾಟ -ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ ಸಂಜೆ ನಡೆದ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ  ನೆಹರು ಮೆಮೋರಿಯಲ್ ಪದವಿ   ಕಾಲೇಜು ಇದರ ಪ್ರಾಂಶುಪಾಲರು ಡಾ. ಕೆ. ಗಿರಿಧರ ಗೌಡ ಮತ್ತು ನೆಹರು ಮೆಮೋರಿಯಲ್ ಪದವಿ   ಕಾಲೇಜು ಇಲ್ಲಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಬಾಲಚಂದ್ರ ಗೌಡ ಅವರು ಭಾಗವಹಿಸಿದ್ದರು.  ಡಾ. ಕೆ. ಗಿರಿಧರ ಗೌಡ ಅವರು ಮಾತನಾಡಿ , ಕಬಡ್ಡಿ ದೈಹಿಕ ಕ್ಷಮತೆಯನ್ನು ಹೆಚ್ಚಿಸುವುದರ ಮೂಲಕವಾಗಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎನ್ನುತ್ತಾ ಸೋಲು ಗೆಲುವುಗಳನ್ನು ಸಮಭಾವದಿಂದ ಸ್ವೀಕಾರ ಮಾಡಬೇಕು ಎಂದರು .  ಪ್ರೊ.ಬಾಲಚಂದ್ರ ಗೌಡ

ಜಿಲ್ಲಾಮಟ್ಟದ ಪದವಿಪೂರ್ವ ವಿಭಾಗದ ಕಬಡ್ಡಿ ಪಂದ್ಯಾಟ -ಸಮಾರೋಪ ಸಮಾರಂಭ Read More »